ರಾಮು ಎಂಟರ್ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ ಸಾಗರ್ ಚಿತ್ರಕ್ಕಾಗಿ ಇತ್ತೀಚೆಗೆ ಎರಡು ಗೀತೆಗಳನ್ನು ಚಿತ್ರಿಸಿಕೊಳ್ಳಲಾಯಿತು.
ಮೊದಲೇ ಏಕೆ ಸಿಗಲಿಲ್ಲ ನೀನು ನನಗೆ
ಮೊದಲೇ ಏಕೆ ಸಿಗಲಿಲ್ಲ ನೀನು ನನಗೆ
ಎಂಬ ಗೀತೆಯನ್ನು ಹಾಗೂ
ಕೈಯಕಿ ಕೈಯಾಕಿ ಮನಸಿಗೆ ಕೈಯಾಕಿ
ಕಣ್ ಹಾಕಿ ಕಣ್ ಹಾಕಿ ವಯಸ್ಸಿಗೆ ಕಣ್ ಹಾಕಿ
ಎಂಬ ಎರಡು ಗೀತೆಗಳನ್ನು ರಾಮು ಹಾಗೂ ಚಿನ್ನಿ ಪ್ರಕಾಶ್ ನೃತ್ಯ ನಿರ್ದೇಶನದೊಂದಿಗೆ ಸಕಲೇಶಪುರ ಸುತ್ತಮುತ್ತ ಹಾಗೂ ಮೈಸೂರು ಲ್ಯಾಂಪ್ಸ್ನಲ್ಲಿ ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್, ಹರಿಪ್ರ್ರಿಯಾ ಹಾಗೂ ೪೦ ಜನ ಸಹ ನರ್ತಕ ನರ್ತಕಿಯರ ಜೊತೆ ಕೃಷ್ಣಕುಮಾರ್ ಛಾಯಾಗ್ರಹಣದಲ್ಲಿ ನಿರ್ದೇಶಕ ಎಂ.ಡಿ. ಶ್ರೀಧರ್ ಚಿತ್ರಿಸಿಕೊಂಡರು.
ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ, ಕೃಷ್ಣಕುಮಾರ್ ಛಾಯಾಗ್ರಹಣ, ಕವಿರಾಜ್ ಸಾಹಿತ್ಯ, ಗುರುಕಿರಣ್ ಸಂಗೀತ, ಮೋಹನ್ ಬಿ.ಕೆರೆ ಕಲೆ, ಸೌಂದರ್ರಾಜ್ ಸಂಕಲನ, ಚಿನ್ನಿ ಪ್ರಕಾಶ್, ರಾಮು ನೃತ್ಯ, ಪಳನಿರಾಜ್, ರವಿವರ್ಮ, ಕೆ.ಡಿ. ವೆಂಕಟೇಶ್ ಸಾಹಸ, ಉಮೇಶ್ಕುಮಾರ್ ನಿರ್ಮಾಣ ಮೇಲ್ವಿಚಾರಣೆಯಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಎಂ.ಡಿ. ಶ್ರೀಧರ್.
ತಾರಾಗಣದಲ್ಲಿ ಪ್ರಜ್ವಲ್